ಸಚ್ಛಾರಿತ್ರೈವಂತ ಮತ್ತು ಕ್ಷಾತ್ರ ತೇಜಸ್ಸಿನ ತರುಣ-ತರುಣಿಯರನ್ನು ಸಮಾಜಕ್ಕೆ ಸಮರ್ಪಿಸುವ ಮೂಲಕ, ವೈಭವಯುತ ಭಾರತವನ್ನು ಕಾಣುವುದೇ ನಮ್ಮ ಸಂಕಲ್ಪವಾಗಿದೆ

ಭಾರತವನ್ನು ಜಗಜ್ಜನನಿಯನ್ನಾಗಿಸುವ ಸಂಕಲ್ಪ ಮಾಡಿದ್ದೀವಿ. ನಿದ್ದೆಯಲ್ಲಿ, ಕನಸಿನಲ್ಲಿ ಕಣ್ಮುಚ್ಚಿ ನಾವು ಈ ನಿರ್ಣಯ ತೆಗೆದುಕೊಂಡಿದಲ್ಲ. ಇತಿಹಾಸದ ಅಧ್ಯಯನದಿಂದ ಪ್ರಾಪ್ತವಾದ ಬೆಳಕಿನಲ್ಲಿ ಅತ್ಯಂತ ನೈಸರ್ಗಿಕವಾಗಿ ಸಂಕಲ್ಪ ಮಾಡಿದ್ದೀವಿ.
ಇದೊಂದು ಯಜ್ಞ…. ಇದರಲ್ಲಿ ನಾವು ಭಸ್ಮ ಆಗ್ತೀವಿ….ಇದು ನಮ್ಮ ಸಂಕಲ್ಪ
ಸನಾತನ ಧರ್ಮ ರಾಜ್ಯದ ಸ್ಥಾಪನೆಗಾಗಿ ಗುರುಕುಲ ವಿದ್ಯಾಪೀಠ
ಭಾರತದ ಮಣ್ಣಿನಲ್ಲಿ ಹುಟ್ಟುವ ಪ್ರತಿಯೊಂದು ಮಗುವು ಕೂಡ ಅದ್ಭುತ ಶಕ್ತಿಯನ್ನು ಹೊಂದಿದೆ. ಅಂತಹ ಜೀವಗಳನ್ನು ಸಂಸ್ಕಾರವಂತ ಮತ್ತು ಸ್ವಾಭಿಮಾನಿಗಳಾಗಿ ಸಾಧನೆಯತ್ತ ಬೆಖೆಸಿದಾಗ ಮಾತ್ರವೇ ಸನಾತನ ಧರ್ಮ ರಾಜ್ಯದ ಸ್ಥಾಪನೆ ನಿಶ್ಚಿತವಾಗಿದೆ.
ಭಾಷಣ-ಘೋಷಣೆಗಳಿಂದ ಏನೂ ಆಗದು. ನಮ್ಮಲ್ಲಿ ನಿಜವಾದ ಇಚ್ಛಾಧಕ್ತಿ ಇರುವುದೇ ಆಗಿದ್ದರೆ, ನಿನಪಿಸಿಕೊಳ್ಳಿ… ಭಾರತದ ಭವ್ಯ ಪರಂಪರೆಯನ್ನು ನಾಶ ಮಾಡಲು ಆಂಗ್ಲ ಶಿಕ್ಷಣವೆಂಬ ವಿಷ ಬೀಜವನ್ನು ನಮ್ಮೊಳರ ಬಿತ್ತಿ, ಮೆಕಾಲೆಯು ಯಶಸ್ವಿಯಾಗುವುದಾದರೆ…? ಸಂತ ಶಕ್ತಿಯ ತಪೋಬಲದಿಂದ ಕರುಣಿಸಲ್ಪಟ್ಟ ಗುರುಕುಲ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ನೀಡುವುದರ ಮೂಲಕ, ಮತ್ತೊಮ್ಮೆ ವೈಭವಯುತ ಭಾರತವನ್ನು ಕಾಣಲು ನಮಗೆ ಏಕೆ ಸಾಧ್ಯವಿಲ್ಲ…?